ಬುಧವಾರ, ಮಾರ್ಚ್ 28, 2012

ವೆಂಕಟೇಶ ಉಪ್ಪಾರ

ಟಿಪ್ಪಣಿ: ಅರುಣ್ ಜೋಳದಕೂಡ್ಲಿಗಿ





ವೆಂಕಟೇಶ ಉಪ್ಪಾರ ಬಳ್ಳಾರಿ ಭಾಗದ ಸತ್ವಯುಕ ಕಥೆಗಾರ, ಜನಪದ ಹಾಡುಗಾರ, ಹಾಗು ಆಯುರ್ವೇದ ಔಷಧಿಗಳ ನಿಪುಣರಾದ ದಿವಂಗತ ಹನುಮಂತಪ್ಪ ಮತ್ತು ಶ್ರೀಮತಿ ಮಾರೆಮ್ಮನವರು.(ದಿವಂಗತ ) ಅವರ ಮಗನಾಗಿ ೦೧-೦೧- ೧೯೭೧ ರಲ್ಲಿ ಜನನ. ಹುಟ್ಟಿದ ಸ್ಥಳ ಈಗಿನ ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ವಡಿಗೆರ ಗ್ರಾಮದಲ್ಲಿ. ಪತ್ರಿಕೋದ್ಯಮವನ್ನು.( ಮೈಸೂರ ವಿಶ್ವವಿದ್ಯಾನಿಲಯ ) ಓದಿದ ಇವರು ರಾಯಚೂರು, ಯರಮರುಸ್ನಲ್ಲಿ ಪ್ರಾಥಮಿಕ ಶಿಕ್ಷಣ, ರಾಯಚೂರಿನ ಸರಕಾರಿ ಕಾಲೇಜು / ಎಲ್ .ವಿ.ಡಿ. ಕಾಲೇಜಿನಲ್ಲಿ ಓದು.

ಉಪ್ಪಾರರ ಮೊದಲ ಕಥೆ `ವಸಂತನ ಸುಮಾ' ರಾಯಚುರವಾಣಿಯಲ್ಲಿ (೧೯೮೮) ಪ್ರಕಟವಾಗಿತ್ತು. ಆ ಮೊದಲ ಕಥೆಯಲ್ಲೇ ವೆಂಕಟೇಶ್ ಕಥೆಗಾರರಾಗುವ ಉಮೇದನ್ನು ತೋರಿದ್ದರು. ಅವರ ಮೊದಲ ಕಥಾ ಸಂಕಲನ `ಹಗರಿ ದಂಡೆ' (೨೦೦೪ ರಲ್ಲಿ ಸುಭಾಷ್ ಭರಣಿ ವೇಧಿಕೆಯ ಸಾಂಸ್ಕೃತಿಕ ಪ್ರಕಾಶನ ಹೊರತಂದಿದೆ) ಹಲವು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗಲೂ ಉಪ್ಪಾರ್ ಅವರನ್ನು ನಾವು ಹಗರಿದಂಡೆ ವೆಂಕಟೇಶ್ ಎಂತಲೇ ಕರೆಯುತ್ತೇವೆ.

ಈ ಕಥನದಲ್ಲಿ ಬಳ್ಳಾರಿಯ ಭಾಷಾ ಸೊಗಡು.. ಜನಜೀವನದ ಚಿತ್ರಣ.. ಗ್ರಾಮೀಣ ಬದುಕು ಛಿದ್ರವಾಗುತ್ತಿರುವುದನ್ನು ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. ಎರಡನೇ ಕಥಾಸಂಕಲನ ಅವಶೇಷ: ೨೦೧೦ ರಲ್ಲಿ ಮೈಸೂರಿನ ಕಿಡಕಿ ಪ್ರಕಾಶನ ಹೊರತಂದಿದೆ.ಇಲ್ಲಿನ ಕಥೆಗಳಲ್ಲಿ ಉಪ್ಪಾರರ ಮತ್ತೊಂದು ಜಿಗಿತ ಕಾಣುತ್ತದೆ. ಇಲ್ಲಿ ಮೊದಲ ಕಥನ ಸಂಕಲನದಲ್ಲಿ ಕಾಣುತ್ತಿದ್ದ ವಾಚ್ಯವನ್ನು ಮೀರಲು ಪ್ರಯತ್ನಿಸಿದ್ದಾರೆ. ಈಗ ಉಪ್ಪಾರರು `ನಾಧವಿಲ್ಲದ ನದಿ' ಎನ್ನುವ ಕಾದಂಬರಿ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಬಳ್ಳಾರಿಯ ಇತ್ತೀಚಿನ ವಿದ್ಯಮಾನಗಳ ಕುರಿತಾಗಿದೆ ಎನ್ನುತ್ತಾರೆ. ಮೌನ ಮಲ್ಲಿಕಾ ಭಾವಗೀತೆಗಳ / ಘಜಲ್ ಗಳ ಸಂಕಲನ ಅಚ್ಚಿನಲ್ಲಿದೆ. ಇದಿಷ್ಟು ವೆಂಕಟೇಶ್ ಉಪ್ಪಾರರ ಸಾಹಿತ್ಯಿಕ ಪಯಣ.



ತಮ್ಮ ಮನೆಯಲ್ಲಿ ಸಾಹಿತ್ಯದ ಹಾಗು ಕನ್ನಡ ನಾಡು ನುಡಿಯ ಅಭಿಮಾನ ಮೂಡಿಸುವುದಕ್ಕೆ ತನ್ನ ಮಡದಿ ಶ್ರೀಮತಿ ಮಲ್ಲಿಕಾ ಇವರೇ ಕಾರಣ ಎನ್ನುವ ವೆಂಕಟೇಶ ಉಪ್ಪಾರ, ಇವರ ಇಬ್ಬರು ಮಕ್ಕಳು ಇಂದು ರಾಜ್ಯ ಮಟ್ಟದಲ್ಲಿ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತಗಾರರಾಗಿ ಹೆಸರು ಮಾಡಿದ್ದಾರೆ. ಮಗ ಹರ್ಷ ಉಪ್ಪಾರ, ಮಗಳು ಅಮೃತ ವರ್ಷಿಣಿ , ಈಗಾಗಲೇ ಕನ್ನಡ ಈ ಟೀವಿ ವಾಹಿನಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯಿಂದ ಪ್ರತಿನಿದಿಸಿರುವ ಪ್ರತಿಬೆಗಳು. ಹಾಗು ಕನ್ನಡದ ಅಭಿಮಾನಕ್ಕಾಗಿ ಅಂಗ್ಲ ಮಾಧ್ಯಮ ವನ್ನು ತೊರೆದು ಕನ್ನಡದ ಸರಕಾರಿ ಶಾಲೆಗಳಲ್ಲಿ ಓದು ಮುಂದುವರಿಕೊಂಡು ಬಂದು ಇತರರಿಗೆ ಮಾದರಿಯದಂತವರು.



ಉಪ್ಪಾರರು ಮೂಲತಃ ಮೌನಜೀವಿ. ಸಾವಧಾನದ ವ್ಯಕ್ತಿತ್ವ. ಸ್ನೇಹಜೀವಿ. ಇವರ ಕಥನದ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ. ಉಪ್ಪಾರರು ಮತ್ತಷ್ಟು ಗಟ್ಟಿಯಾಗಿ ಬರಹಕ್ಕೆ ತೊಡಗಿಕೊಳ್ಳಬೇಕಿದೆ. ನಾವಂತೂ ಅವರ ನಾಧವಿಲ್ಲದ ನದಿ ಕಾದಂಬರಿಯನ್ನು ನಿರೀಕ್ಷೆಯಿಂದ ಕಾಯುತ್ತೇವೆ. ಈ ಕಾದಂಬರಿ ಉಪ್ಪಾರ್ ಅವರ ಕಥನದ ಮಾದರಿಯ ಮತ್ತೊಂದು ಜಿಗಿತದಂತೆ ಬರಲಿ ಎನ್ನುವುದು ನಮ್ಮ ಆಶಯ.


ಸಂಪರ್ಕ:
-ವೆಂಕಟೇಶ ಉಪ್ಪಾರ
upparavenkatesh55@gmail.co
ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ
ಪ್ರಥಮ ದರ್ಜೆ ಸಹಾಯಕ
ಬಳ್ಳಾರಿ
ಮೊಬೈಲ್: 9844947944

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ