ಸೋಮವಾರ, ಮಾರ್ಚ್ 12, 2012

ಬಳ್ಳಾರಿ ರಾಘವ ಕಲಾಮಂದಿರದಲ್ಲಿ ಪಲ್ಲವಿಸಿದ ಪುಸ್ತಕಗಳು


ಪಲ್ಲವ ಪ್ರಕಾಶನ ಪ್ರಕಟಿಸಿದ 12 ಪುಸ್ತಕಗಳು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ 11.03.12 ರಂದು ಬಿಡುಗಡೆಯಾದವು.ಪಲ್ಲವ ವೆಂಕಟೇಶ್ ಅವರು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿ, ಪುಸ್ತಕ ಪ್ರಕಟಣೆಯ ಸಾರ್ಥಕಗೊಳಿಸಿದ ಲೇಖಕರನ್ನು ನೆನೆದರು. ಕನ್ನಡ ವಿಶ್ವವಿದ್ಯಾಲಯದ ಪ್ರೊ.ಟಿ.ಆರ್. ಚಂದ್ರಶೇಖರ್ ಅವರು ಬಿಡುಗಡೆ ಮಾಡಿದರು. ಅಮರೇಶ್ ನುಗಡೋಣಿ, ನಟರಾಜ ಹುಳಿಯಾರ ಪುಸ್ತಕ ಬಿಡುಗಡೆ ನೆಪದಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆಯ ಹೊಸ ದಾರಿಗಳ ಬಗ್ಗೆ, ಈ ಹೊತ್ತಿನ ಬರಹಗಾರನ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದರು. ಮುಖ್ಯವಾಗಿ ಬಿಡುಗಡೆಯಾದ ಹನ್ನೆರಡು ಪುಸ್ತಕಗಳ ಎಳೆ ಹಿಡಿದೇ ವರ್ತಮಾನದ ಸಂಗತಿಗಳ ಬಗ್ಗೆ ಮಾತನಾಡಿದ್ದು ಹೆಚ್ಚು ಪ್ರಸ್ತುತ ಅನ್ನಿಸಿತು.


ಉಸ್ರುಬುಂಡೆ ಸಂಕಲನದ ಜ.ನಾ.ತೇಜಶ್ರೀ, ಈ ಲೋಕದ ಇನ್ನೊಂದು ಗಿಡ ಸಂಕಲನದ ಶಿವರಾಜ ಬೆಟ್ಟದೂರ್, ಕವಿತೆಯ ಕನಸು ಸಂಕಲನದ ಹೆಚ್.ಬಿ ರವೀಂದ್ರ, ಅಯ್ಯಂಗಾರಿಯ ಹತ್ತು ಪೈಸೆಯ ಬ್ರೆಡ್ಡು ಸಂಕಲನದ ಸೈಫ್ ಜಾನ್ಸೆ ಕೊಟ್ಟೂರು, ಈ ಕವಿಗಳು ಹಾಜರಿದ್ದು ತನ್ನ ಒಂದೊಂದು ಕವಿತೆಗಳನ್ನು ಓದಿದರು. ಆರಿಫ್ ರಾಜಾ,ನಾಗಣ್ಣ ಕಿಲಾರಿ,ಅರುಣ್ ಪದ್ಯವಾಚಿಸಿ ಪುಸ್ತಕ ಬಿಡುಗಡೆಯ ಜತೆ ಕವಿಗೋಷ್ಠಿಯೂ ಮಿಳಿತವಾಯಿತು. ದನ ಕಾಯೋ ಹುಡುಗನ ದಿನಚರಿಯ ಟಿ.ಎಸ್. ಗೊರವರ ತನ್ನ ಅನುಭವ ಕಥನವನ್ನು ವಾಚಿಸಿದರು.

ಮುಖ್ಯವಾಗಿ ಕಥೆಗಾರ ವೆಂಕಟೇಶ್ ಉಪ್ಪಾರ್ ಅವರ ಮಗಳು ಅಮೃತ ಉಪ್ಪಾರ್, ಹರ್ಷ ಉಪ್ಪಾರ್, ಸಂದೀಪ ಉಪ್ಪಾರ ಅವರ ಪುಟ್ಟ ಪ್ರತಿಭೆಗಳ ಸಂಗೀತ ಕಛೇರಿ ಇಡೀ ಕಾರ್ಯಕ್ರಮದಲ್ಲಿ ನಾದದ ಅಲೆಯಲ್ಲಿ ಸಭಿಕರನ್ನು ತೇಲಿಸಿ, ಖಷಿಕೊಟ್ಟು ಎಲ್ಲರಿಂದ ಮೆಚ್ಚುಗೆಗೂ ಪಾತ್ರರಾದರು.
ಇಡಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅನವಶ್ಯಕ ಹೊಗಳಿಕೆ ಇಲ್ಲದೆ,ಆಪ್ತವಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ